ಸೌದಾಮಿನಿ

ನಿರಾಭರಣ ಸುಂದರಿ
ಎನ್ನಂತರಾಳದ ಗೀತಿಕೆ ಮಂಜರಿ |

ಒಡವೆ ತೊಡವಲಂಕಾರವಿರದ
ಸಮದರ್ಶಿ ಸರಳಭಿಸಾರಿಕೆ
ರೂಪಿನೊನಪಿನ ಬಿಂಕ ಬೆಡಗನು
ತೊರೆದ ಸಿಂಗರ ಭೂಮಿಕೆ |

ಝಣ ಝಣ ಶ್ರೀ ಸದ್ದ ಬಯಸದ
ದುಗ್ದ ಹಾಸ ಮೌನದೆ ಮಾನಿನಿ
ಅಡ್ಡಗೋಡೆಯ ಕುಟ್ಟಿ ಕೆಡವಿಸೊ
ತಿಂಗಳಂಗಳ ಸೌದಾಮಿನಿ |

ಅವಳ ದರುಶನ ಕವಿತೆ ಕಾರಣ
ದಿಟ್ಟ ದಿಟ್ಟಿಯ ಭಾವನಾ
ಹೆಮ್ಮೆ ಲಜ್ಜೆಯೊಡಲಾಳ ಹುಡಿನುಡಿ
ಪದ ಪಾದವರ್ಣದ ವರ್ಣನಾ |

ನಿನ್ನ ಪದತಲದಲ್ಲಿ ನನ್ನಯ
ಕೊರಳ ಕೊಳಲಿನ ಗಾನವು
ನನ್ನ ಜೀವನ ಪಥವೆ ನಿನ್ನಯ
ರಾಗಾನುರಾಗ ಸುಸ್ವರ ಸೇತುವು |

ಗುಡಿಸಲಂಗಳ ರಂಗವಲ್ಲಿಯ
ಅರಳು ಮಲ್ಲಿಗೆ ಮ್ಲಾನವು
ಸೂರು ಸೂರಲಿ ಸೂಸೋ ರಶ್ಮಿಯ
ಮುಗ್ದ ಚಂದ್ರಿಕೆ ಗೀತವು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರ ಬಳಸಿ ನಿಂತಿರುವೆನೊ
Next post ನೀಲಿ ಕಾಡು

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys